Posts

Image
ಶಾಲೆ ಒಂದು ನಿರ್ದಿಷ್ಟ ಗುರಿಯನ್ನು ಹೊಂದಿದ್ದು, ಜ್ಞಾನವನ್ನು ಹಂಚುವ ಮತ್ತು ಜೀವನ ಕೌಶಲ್ಯವನ್ನು ಬೆಳೆಸುವ ಶಿಕ್ಷಣದ ಕೇಂದ್ರ. ಇದು ವಿದ್ಯಾರ್ಥಿಗಳಿಗೆ ಭೌತಿಕ, ಮಾನಸಿಕ, ಬೌದ್ಧಿಕ ಮತ್ತು ನೈತಿಕ ಬೆಳವಣಿಗೆಗೆ ಪಾಠ ನೀಡುವ ಪವಿತ್ರ ಸ್ಥಳವಾಗಿದೆ. ಮಕ್ಕಳ ಜೀವನದಲ್ಲಿ ಶಾಲೆ ಅವರ ದ್ವಿತೀಯ ಮನೆಯಾಗಿ ಕಾರ್ಯನಿರ್ವಹಿಸುತ್ತದೆ, ಅಲ್ಲಿ ಅವರು ಗೆಳೆಯರನ್ನು ಕಾಣುವ ಜೊತೆಗೆ ಶಿಕ್ಷಕರ ಮಾರ್ಗದರ್ಶನದಲ್ಲಿ ತಮ್ಮ ಭವಿಷ್ಯ ನಿರ್ಮಿಸಿಕೊಳ್ಳುಲು ಪ್ರಾರಂಭಿಸುತ್ತಾರೆ.ಶಾಲೆಗಳು ಶಿಷ್ಟಾಚಾರ, ಜ್ಞಾನ ಮತ್ತು ಸಮರ್ಥ ಕೌಶಲ್ಯಗಳನ್ನು ಕಲಿಸುವ ಪ್ರಮುಖ ಜಾಗವಾಗಿದೆ. ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಮೂಲಕ ವ್ಯಕ್ತಿತ್ವ ವಿಕಾಸಕ್ಕೆ ಸಹಾಯಕವಾಗುತ್ತದೆ.ಶಾಲೆಯಲ್ಲಿ ವಿದ್ಯಾರ್ಥಿಗಳು ಜಾತಿ , ಧರ್ಮ, ಭಾಷೆ, ಮತ್ತು ಸಂಸ್ಕೃತಿಗಳ ಅಂತರವನ್ನು ಮೀರಿ ಸಹಜವಾಗಿ ಬದುಕಲು ಕಲಿಯುತ್ತಾರೆ. ಮಕ್ಕಳಿಗೆ ಹೊಸ ವಿಜ್ಞಾನ ಮತ್ತು ತಂತ್ರಜ್ಞಾನಗಳನ್ನು ಪರಿಚಯಿಸುವ ಮೂಲಕ, ಅವರು ವಿಶ್ವದ ಸ್ಪರ್ಧಾತ್ಮಕತೆಯನ್ನು ಸಮರ್ಥವಾಗಿ ಎದುರಿಸಲು ಸಿದ್ಧರಾಗುತ್ತಾರೆ.ಶ್ರದ್ಧೆ, ಶಿಸ್ತು, ಹೊಣೆಗಾರಿಕೆ, ಮತ್ತು ಮಾನವೀಯ ಮೌಲ್ಯಗಳನ್ನು ಶಾಲೆಯ ಆಧಾರಶಿಲೆಗಳಿಂದ ಕಲಿಯಲು ಸಾಧ್ಯವಾಗುತ್ತದೆ.ವಿದ್ಯಾಭ್ಯಾಸ ಮಾತ್ರವಲ್ಲ, ಶೈಕ್ಷಣಿಕ, ಕ್ರೀಡಾ, ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ವ್ಯಕ್ತಿಯ ಸಮಗ್ರತೆಯನ್ನು ಬೆಳೆಸುವ ಜಾಗವಾಗಿವೆ. ನಿರಂತರ ಬದಲಾಗುತ್ತಿರುವ ಜಗತ್ತಿನಲ್ಲಿ ಇಂದು ಶಾಲೆಗಳು ಸಹ ...

ಮದ್ಯವರ್ಜನ ಶಿಬಿರ

Image
      *"ನಿನ್ನ ನೀ ಪರಿವತಿ೯ಸಿ ಕೋ"*  ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವಿಜಯಪುರ ಲೀಜನ್ ಹಾಗೂ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಬಿ ಸಿ ಟ್ರಸ್ಟ್ ಜನಜಾಗೃತಿ ವೇದಿಕೆ ಹಾಗೂ ಇತರ ಸಂಘ ಸಂಸ್ಥೆಗಳ ಸಯೋಗದೊಂದಿಗೆ ಬಾಲೇಪುರದ  ಶ್ರೀ ಮುದ್ದಮ್ಮ ಕಾಕಣ್ಣ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ 1870ನೇ ಮಧ್ಯವರ್ಜನ ಶಿಬಿರದಲ್ಲಿ ಸೀನಿಯರ್ ಛೇಂಬರ್ ಇಂಟರ್ನ್ಯಾಷನಲ್ ನ ರಾಷ್ಟ್ರೀಯ ಉಪಾಧ್ಯಕ್ಷರಾದ ಡಾ. ಎಂ ಶಿವಕುಮಾರ್ ತರಬೇತಿ ನೀಡಿ ಮಾತನಾಡುತ್ತಾ ನಿಮ್ಮನ್ನು ನೀವೇ ಪರಿವರ್ತಿಸಿಕೊಳ್ಳಬೇಕು ಬೇರೆ ಯಾರಿಂದಲೂ ನಿಮ್ಮ ಪರಿವರ್ತನೆ ಸಾಧ್ಯವಿಲ್ಲ, ದುಶ್ಚಟಗಳಿಂದ ಮುಕ್ತರಾಗಿ ನವ ಜೀವನವನ್ನು ಸಾಗಿಸಿ ಇತರರಿಗೆ ಆದರ್ಶಪ್ರಾಯರಾಗಿ ಎಂದು ಕರೆ ನೀಡಿದರು ಚಲನಚಿತ್ರ ಸಾಹಿತಿಗಳು ಹಾಗೂ ನಿರ್ದೇಶಕರಾದ ವಸಂತ್ ಕುಮಾರ್ ಅವರು ಮಾತನಾಡುತ್ತಾ, ನಾವು ಈ ಚಟ ಬಿಡುವುದರಿಂದ ನಮ್ಮ ಕುಟುಂಬ ಸಮಾಜ ಆರೋಗ್ಯಕರವಾಗಿರುತ್ತೆ ಅದರಿಂದ ದುಶ್ಚಟಗಳಿಗೆ ದಾಸರಾಗದೆ, ನಿಮ್ಮ ಕುಟುಂಬಕ್ಕೆ ಪ್ರೀತಿ ಪಾತ್ರರಾಗುವಂತೆ ಜೀವನ ನಡೆಸಿ ಎಂದರು  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸೀನಿಯರ್ ಛೇಂಬರ್ ನ ಅಧ್ಯಕ್ಷರಾದ ಕೆ ವೆಂಕಟೇಶ್ ಮಾತನಾಡುತ್ತಾ ನಮ್ಮ ತಾಲೂಕಿನಲ್ಲಿ ಬಹಳಷ್ಟು ಜನ ಈ ಮಧ್ಯ ವ್ಯಸನಿ ಗಳು ಇದ್ದು ಇಲ್ಲಿರುವ ನಿಮಗೆ ಮಾತ್ರ ಪರಿವರ್ತನೆಯಾಗುವ ಅವಕಾಶವನ್ನು ಆ ಮಂಜುನಾಥ ಮಾಡಿಕೊಟ್ಟಿದ್ದಾನೆ ಆದ್ದರಿಂದ ಈ...

"ವೈದ್ಯೋ ನಾರಾಯಣ ಹರಿ"

Image
ವಿಶ್ವ ವೈದ್ಯರ ದಿನಾಚರಣೆ ವೈದ್ಯ ನಾರಾಯಣ ಹರಿ ಎಂಬ ವೇದೋಕ್ತಿಯಂತೆ ವೈದ್ಯರು ನಾರಾಯಣನ ಸಮಾನ ತಕ್ಷಣವೇ ಕಾಣುವ ದೇವರು ಎಂದರೆ ವೈದ್ಯರು ಸೇವೆಗಳನ್ನು ಗೌರವಿಸಬೇಕಾಗಿರುವುದು ಎಂದು ನಮ್ಮ ಆದ್ಯ ಕರ್ತವ್ಯ ವೆಂದು ತಿಳಿಸಿದರು. ತಮ್ಮ ಪ್ರಾಣವನ್ನು ಒತ್ತೆ ಇಟ್ಟು ರೋಗಿಗಳನ್ನು ಕಾಪಾಡುತ್ತಾರೆ ಎಂದು ವಿಶ್ಲೇಷಣೆ ಮಾಡುತ್ತಾ.ಡಾ ಶಿವಕುಮಾರ್ ತಿಳಿಸಿದರು    ವಿಜಯಪುರ ಪಟ್ಟಣದ ಸೀನಿಯರ್ ಚೇಂಬರ್ ವಿಜಯಪುರ ಲೀಜನ್ ಜೇಸಿಐ ವಿಜಯಪುರ ಸಂಯುಕ್ತ ಆಶ್ರಯದಲ್ಲಿ ವಿಶ್ವ ವೈದ್ಯರ ದಿನಾಚರಣೆಯನ್ನು ಆಚರಿಸಲಾಯಿತ್ತು.    ಈ ಕಾರ್ಯಕ್ರಮದಲ್ಲಿ ಜೇಸಿಐ ಅಧ್ಯಕ್ಷರಾದ ಎನ್ ಸಿ ಮುನಿ ವೆಂಕಟರಮಣಪ್ಪ ಮಾತನಾಡುತ್ತಾ ವೈದ್ಯರು ದೇವರ ಸಮಾನಾರಿದ್ದಂತೆ ಎಂದು ತಿಳಿಸುತ್ತಾ ಡಾಕ್ಟರ್ ಸುರೇಶ್ ರವರು 30 ವರ್ಷಗಳಿಂದ ಮತ್ತು ಡಾಕ್ಟರ್ ಮೂರ್ತಿರವರು 25 ವರ್ಷಗಳಿಂದ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವುದು ಅಮೋಘ ಸೇವೆ ಎಂದು ತಿಳಿಸುತ್ತಾ ಭಯಂಕರ ರೋಗವಾದ ಕೊರೋನಾ ಸಂದರ್ಭದಲ್ಲಿ ವಿಶೇಷ ಸೇವೆಯನ್ನು ಸಲ್ಲಿಸಿ ಜನರ ಪ್ರೀತಿಗೆ ಪಾತ್ರರಾಗಿದ್ದರೆ ಎಂದು ತಿಳಿಸಿದರು.    ಈ ಕಾರ್ಯಕ್ರಮದಲ್ಲಿ ಶ್ರೀ ರಾಘವೇಂದ್ರ ಕ್ಲಿನಿಕ್ ಡಾಕ್ಟರ್ ಸುರೇಶ್ ಧನುಷ್ ಕ್ಲಿನಿಕ್ ಡಾಕ್ಟರ್ ಮೂರ್ತಿ ರವರನ್ನು ಉಭಯ ಸಂಸ್ಥೆಗಳಿಂದ ಸನ್ಮಾನಿಸಿ ಗೌರವಿಸಿದರು .    ಈ ಕಾರ್ಯಕ್ರಮದಲ್ಲಿ ನೆನಪಿನ ಕಾಣಿಕೆಯ ಪ್ರಾಯೋಜಕರು ನಿಕಟಪೂರ್ವ ಅಧ್ಯಕ್ಷರಾದ ಸೀನಿಯರ್ ವ...

ಪತ್ರಿಕಾ ದಿನಾಚರಣೆ

Image
****ಪತ್ರಕರ್ತರ ದಿನಾಚರಣೆ***** ವಿಜಯಪುರ ಪಟ್ಟಣದ ಸೀನಿಯರ್ ಚೇಂಬರ್ ವಿಜಯಪುರ ಲೀಜನ್ ಮತ್ತು ಜೇಸಿಐ ವಿಜಯಪುರ ರವರ ಸಂಯುಕ್ತ ಆಶ್ರಯದಲ್ಲಿ ಪತ್ರಕರ್ತ ದಿನಾಚರಣೆಯನ್ನು ಆಚರಿಸಲಾಯಿತು.    ಪಟ್ಟಣದ ಹಿರಿಯ ಪತ್ರಕರ್ತರಾದ ಶ್ರೀ ವಿ ಎಂ ಕಿಶೋರ್ ಕುಮಾರ್ ರವರನ್ನು ಸನ್ಮಾನಿಸಿ ಗೌರವಿಸಿದರು.    ಈ ಸರಳ ಕಾರ್ಯಕ್ರಮದಲ್ಲಿ ಸೀನಿಯರ್ ಚೇಂಬರ್ ವಿಜಯಪುರ ಲೀಜನ್ ಅಧ್ಯಕ್ಷರಾದ ಶ್ರೀ ಎಂ ಶಿವಕುಮಾರ್ ಜೇಸಿಐ ಅಧ್ಯಕ್ಷರಾದ ಮುನಿ ವೆಂಕಟರಮಣಪ್ಪ ನಿಕಟ ಪೂರ್ವ ಅಧ್ಯಕ್ಷರಾದ ವಿ ವೆಂಕಟೇಶ್ ಉಪಾಧ್ಯಕ್ಷರಾದ ಜೆ.ಆರ್ ಮನಿವೀರಣ್ಣ ಸಂಸ್ಥಾಪಕ ಅಧ್ಯಕ್ಷರಾದ ಸುಬ್ರಮಣ್ಯ ಶೆಟ್ಟಿ ನೂತನ ಸದಸ್ಯರಾದ ವಿ.ವಿಶ್ವನಾಥ್ ಮತ್ತು ಮುರುಳಿ ಮಗು ಉಪಸ್ಥಿತರಿದ್ದರು.

ವೇದಗಣಿತ ನಮ್ಮ ಜೀವನದ ವೇಗ ಗಣಿತ

Image
******ವೇದ ಗಣಿತ ಕಾರ್ಯಗಾರ******* ವೇದಗಣಿತ ಅಂಕಗಣಿತದ ಕಾರ್ಯಚರಣೆಗಳನ್ನು ತ್ವರಿತವಾಗಿ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಲು ಪ್ರಾಚೀನ ತಂತ್ರಗಳು ಮತ್ತು ತಂತ್ರಗಳ ಸಂಗ್ರಹ ಗೊಳಿಸಲು ವೇದಮಠವು ವೇದಗಳಿಂದ ಬರುತ್ತದೆ ಎಂದು ಜೇಸಿಐ ಅಧ್ಯಕ್ಷರಾದ ಮುನಿವೆಂಕಟರಮಣಪ್ಪ ತಿಳಿಸಿದರು.    ವಿಜಯಪುರದ ಪಟ್ಟಣದ ಸೀನಿಯರ್ ಚೇಂಬರ್ ವಿಜಯಪುರ ಲೀಜನ್ ಮತ್ತು ಜೇಸಿಐ ವಿಜಯಪುರ ಸಂಯುಕ್ತ ಆಶ್ರಯದಲ್ಲಿ * ವೇದಗಣಿತ* ಕಾರ್ಯಾಗಾರವನ್ನು ಎಂ.ಎಸ್.ಆರ್ ಸಂಕೀರ್ಣದಲ್ಲಿ ಹಮ್ಮಿಕೊಳ್ಳಲಾಗಿತ್ತು .    ಈ ಕಾರ್ಯಗಾರದಲ್ಲಿ ಸೀನಿಯರ್ ಚೇಂಬರ್ ವಿಜಯಪುರ ಲೀಜನ್ ಅಧ್ಯಕ್ಷರಾದ ಡಾ ಎಂ ಶಿವಕುಮಾರ್ ರವರು ಮಾತನಾಡುತ್ತಾ ಉಡುಪಿಯ ಜಗದ್ಗುರು ಶ್ರೀ ಭಾರತಿ ಕೃಷ್ಣ ತೀರ್ಥಜಿ ಜಿಮಹಾರಾಜ ಎಂಬುವರು 1911 ರಿಂದ 1918ರಲ್ಲಿ ವೇದಗಣಿತಕ್ಕೆ ಪುನರ್ಜೀವನಗೊಳಿಸಿ ಗಣಿತದ 16 ಸೂತ್ರಗಳನ್ನು ಮರು ಪರಿಶೀಲನೆ ಮಾಡಿ 1957ರಲ್ಲಿ ವೇದಿಕ್ ಗಣಿತ ಎಂಬ ಪುಸ್ತಕ ಬರೆದರು. 1965ರಲ್ಲಿ ಪುಸ್ತಕವನ್ನು ಲೋಕಾರ್ಪಣೆ ಮಾಡಿದರು.  ******* ವೇದಗಣಿತದ ಪ್ರಯೋಜನಗಳು***** ಪ್ರಾಥಮಿಕ ಲೆಕ್ಕಾಚಾರವನ್ನು ಹತ್ತರಿಂದ ಹದಿನೈದು ಪಟ್ಟಿ ವೇಗವಾಗಿ ಮಾಡುತ್ತದೆ ತಪ್ಪಾದರೆ ಊಹಗೆ ಸಹಾಯ ಮಾಡುತ್ತದ. ಎಲ್ಲಾ ತರಗತಿಗೆ ಉಪಯುಕ್ತವಾಗುತ್ತದೆ . ಬೆರಳು ಎಣಿಕೆ ಮತ್ತು ಬದಲಾವಣೆ ಕೆಲಸವನ್ನು ಕಡಿಮೆ ಮಾಡಲು ಒಂದು ತಾಂತ್ರಿಕ ಸಾಧನ. ಏಕಾಗ್ರತೆಯನ್ನು ಹೆಚ್ಚಿಸುತ್ತದ...
Image
Image